ಮುಂಗಾರು ಮಳೆ: ಹಾವೇರಿಯ ನಾಲ್ಕು ನದಿಗಳಿಗೆ ಜೀವಕಳೆ - ರೈತರು ಹೇಳುವುದೇನು? ಹಾವೇರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದಾಗಿ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳಿಗೆ ಜೀವಕಳೆ ಬಂದಿದೆ. ಈ ನದಿಗಳು ಮುಂಗಾರು ಪೂರ್ವದಲ್ಲಿ ಮಳೆಯಿಲ್ಲದೆ ಖಾಲಿಯಾಗಿದ್ದವು, ಇದೀಗ ಮಳೆಯಿಂದ ನೀರು ಹರಿಯುತ್ತಿದೆ. ತುಂಗಭದ್ರಾ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಅದು ಮೈದುಂಬಿಕೊಂಡು ಹರಿಯುತ್ತಿದೆ. ವರದಾ ನದಿಯ ಜನ್ಮಸ್ಥಳ ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ಅದು ಸಹ ಮೈದುಂಬಿಕೊಂಡು ಹರಿಯುತ್ತಿದೆ. ಧರ್ಮಾ ಮತ್ತು ಕುಮದ್ವತಿ ನದಿಗಳಲ್ಲಿ ನೀರು ಇದೆಯಾದರೂ ಮೈದುಂಬಿಕೊಂಡಿಲ್ಲ. ತುಂಗಭದ್ರಾ ನದಿಗೆ ಗಾಜನೂರಿನ ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು, ಅದು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ರೈತರಲ್ಲಿ ಮೂಡಿದ ಮಂದಹಾಸ: ಕಳೆದ ಒಂದು ತಿಂಗಳಿಂದ ಮಳೆ ಕಾಣದ ಹಾವೇರಿ ರೈತರಿಗೆ ಈ ನದಿಗಳು ತುಂಬಿರುವುದು ಸಂತಸ ತಂದಿದೆ. ನದಿಗಳ ನೀರು ಜಮೀನಿನಲ್ಲಿರುವ ಕೊಳವೆಬಾವಿಗಳನ್ನು ರಿಚಾರ್ಜ್ ಮಾಡುತ್ತದೆ. ಅಂತರ್ಜಲ ಹೆಚ್ಚಾದರೆ ರೈತರು ನೀರಾವರಿ ಬೆಳೆಗಳನ್ನು ಬೆಳೆಯಬಹುದು ಎನ್ನುತ್ತಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು, ಇತ್ತ ಅಲ್ಪ ಸ್ವಲ್ಪ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಚ್ಚ ಹಸಿರಾಗಿವೆ. ಕಳೆದ ಕೆಲ ದಿನಗಳ ಹಿಂದೆ ಆತಂಕದಲ್ಲಿದ್ದ ರೈತರಿಗೆ ವರುಣದೇವ ಆಶಾಭಾವನೆ ಮೂಡಿಸಿದ್ದಾನೆ. ಇದೇ ರೀತಿ ಮಳೆಯಾದರೆ ಸಾಕು, ನಮ್ಮ ಬೆಳೆ ಬರುವುದು ನಿಶ್ಚಿತ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು. ನದಿಗಳು ತುಂಬಿ ಹರಿಯುತ್ತಿದ್ದು, ಇತ್ತ ಅಲ್ಪ ಸ್ವಲ್ಪ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಚ್ಚ ಹಸಿರಾಗಿವೆ. ಕಳೆದ ಕೆಲ ದಿನಗಳ ಹಿಂದೆ ಆತಂಕದಲ್ಲಿದ್ದ ರೈತರಿಗೆ ವರುಣದೇವ ಆಶಾಭಾವನೆ ಮೂಡಿಸಿದ್ದಾನೆ. ಇದೇ ರೀತಿ ಮಳೆಯಾದರೆ ಸಾಕು, ನಮ್ಮ ಬೆಳೆ ಬರುವುದು ನಿಶ್ಚಿತ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು. ನದಿಗಳು ತುಂಬಿ ಹರಿಯುತ್ತಿದ್ದು, ಇತ್ತ ಅಲ್ಪ ಸ್ವಲ್ಪ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಚ್ಚ ಹಸಿರಾಗಿವೆ. ಕಳೆದ ಕೆಲ ದಿನಗಳ ಹಿಂದೆ ಆತಂಕದಲ್ಲಿದ್ದ ರೈತರಿಗೆ ವರುಣದೇವ ಆಶಾಭಾವನೆ ಮೂಡಿಸಿದ್ದಾನೆ. ಇದೇ ರೀತಿ ಮಳೆಯಾದರೆ ಸಾಕು, ನಮ್ಮ ಬೆಳೆ ಬರುವುದು ನಿಶ್ಚಿತ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು. ನದಿಗಳು ತುಂಬಿ ಹರಿಯುತ್ತಿದ್ದು, ಇತ್ತ ಅಲ್ಪ ಸ್ವಲ್ಪ ಮಳೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಹಚ್ಚ ಹಸಿರಾಗಿವೆ. ಕಳೆದ ಕೆಲ ದಿನಗಳ ಹಿಂದೆ ಆತಂಕದಲ್ಲಿದ್ದ ರೈತರಿಗೆ ವರುಣದೇವ ಆಶಾಭಾವನೆ ಮೂಡಿಸಿದ್ದಾನೆ. ಇದೇ ರೀತಿ ಮಳೆಯಾದರೆ ಸಾಕು, ನಮ್ಮ ಬೆಳೆ ಬರುವುದು ನಿಶ್ಚಿತ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು.#agriculture #climate #weather #farming #rural_life
Judiciary must not create anti-investment climate: SC #Judiciary #create #anti-investment_climate #create_anti-investment #climate
